ಪೋಸ್ಟ್‌ಗಳು

ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ

 ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ  ಅನಿವಾಸಿಯರಿಗೆ ಭಾರತೀಯ ಸಂಸ್ಕೃತಿ, ಕಲೆಯ ಮೇಲೆ ಬಹಳ ಅಭಿಮಾನ ಹಾಗು ನಾವು ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಕಲಿಯುವುದು ಮತ್ತು ಕಲಿಸುವುದುರಲ್ಲಿ ಎಲ್ಲಿಲ್ಲದ ಸಂತೋಷ. ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭಾರತಮುನಿಯ 'ನಾಟ್ಯಶಾಸ್ತ್ರದ' ಪ್ರಸ್ತಾವವೂ ಖಂಡಿತ. ನಾಟ್ಯಶಾಸ್ತ್ರ ಅಂತಹ ಬೃಹದ್ಗ್ರಂಥದ ಪರಿಚಯ ಸರ್ವೇಸಾಮ್ನಾರಿಗಿಲ್ಲ. ಅಷ್ಟೇಅಲ್ಲ ನಾಟಕ ರಂಗ ನೃತ್ಯ ರಂಗ  ಮತ್ತು ಸಂಗೀತ ಜಗತ್ತು ಕೂಡ ಇದರ ಬಗ್ಗೆ ಮಹತ್ವ ತಿಳಿದರು ಅದರ ಪ್ರಚಾರ ಹಾಗು ಅದನ್ನು ಓಡುವದರ ಬಗ್ಗೆ ಒತ್ತಾಯ ಅಥವಾ ಒತ್ತಡ ಕೊಡುವುದಿಲ್ಲ.   ನಾಟ್ಯಶಾಸ್ತ್ರದ ಪ್ರಥಮ ಬಾರಿಗೆ ಇಂಗ್ಲಿಷ್ ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಂಸರು ಪ್ರೊಫೆಸರ್ ರಾಧಾವಲ್ಲಭ ತ್ರಿಪಾಠಿ ಅವರು ಸೋಮವಾರ ನೆಹರು ಸೆಂಟರ್ ನಲ್ಲಿ ನಡೆದ 'ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ'' ಬಗ್ಗೆ ಮಾತನಾಡುವ ಮುನ್ನ ವಿಡಂಬನೆಗಳ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದರು. ಬ್ರಿಟನಿನಲ್ಲಿ ಶೇಕ್ಸಪೀಯರ್ ವಿವರಣೆಯ ಮಾದರಿ ರಂಗಮಂಚವಿದೆ ಹಾಗೆ ಬಹಳಷ್ಟು ದೇಶಗಳಲ್ಲಿ ತಮ್ಮ ಸಂಸ್ಕೃತಿ ಎತ್ತಿ ಹಿಡಿವ  ಕಟ್ಟಡ ಹಾಗು ಸಂಗ್ರಹಾಲವನ್ನು ಅಲ್ಲಿಯ ನಾಗರೀಕರು ನಿರ್ಮಿಸಿದ್ದಾರೆ. ಅದೇ ಭಾರತದಲ್ಲಿ ಇನ್ನು ಭರತಮುನಿಯು ಉಲ್ಲೇಖಿಸಿದಂತಹ  ರಂಗಮಂಚವು ಸೃಷ್ಟಿಯಾಗಬೇಕಿದೆ ಅಂದರು. ನಾಟ್ಯಶಾಸ್ತ್ರ ಕೇವಲ ನೃತ

ಬ್ರಿಟಿಷ್ ಸಂಸತ್ತಿನಲ್ಲಿ ಮೆರೆದ ಕೈಮಗ್ಗ ಮತ್ತು ಕರ್ನಾಟಕದ ಜಾನಪದ ಕಲೆಗಳು

 ಬ್ರಿಟಿಷ್ ಸಂಸತ್ತಿನಲ್ಲಿ ಮೆರೆದ ಕೈಮಗ್ಗ ಮತ್ತು ಕರ್ನಾಟಕದ ಜಾನಪದ ಕಲೆಗಳು ವಿಶ್ವ ಪರಂಪರೆಯ ಸಪ್ತಾಹದ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಆಸಕ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಈ ಸಂದರ್ಭದಲ್ಲಿ ಭಾರತದ ವಿವಿಧ ಪ್ರದೇಶಗಳ ಕೈಮಗ್ಗಗಳು ಗಮನ ಸೆಳೆದವು. ಹಸ್ತ ಶಿಲ್ಪಮ್ ಎಂಬ ಕಾರ್ಯಕ್ರಮವನ್ನು ಸಂಸ್ಕೃತ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್, ಯುಕೆ ಮೂಲದ ಕಲಾ ಚಾರಿಟಿ ಆಯೋಜಿಸಿದೆ ಮತ್ತು ಯುಕೆ ಮಾಜಿ ಇಂಧನ ಮತ್ತು ಹವಾಮಾನ ಬದಲಾವಣೆಯ ಸಚಿವ ಮತ್ತು ಪ್ರಸ್ತುತ ರೋಹ್ಯಾಂಪ್ಟನ್ ವಿಶ್ವವಿದ್ಯಾಲಯದ ಕುಲಪತಿ ಬ್ಯಾರನೆಸ್ ವರ್ಮಾ ಅವರು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಪ್ರಾರಂಭಿಸಿ ಹಾಗು ಸಭೆಯನ್ನು ಉದ್ದೇಶಿಸಿ  ಬ್ಯಾರನೆಸ್ ವರ್ಮಾ ಸಂಪ್ರದಾಯಗಳು ಮತ್ತು ಪರಂಪರೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು U.K ಮತ್ತು ಅದರಾಚೆಗಿನ ಅದರ ಮುಂದುವರಿದ ಪ್ರಯತ್ನಗಳು ಮತ್ತು ಸಾಂಸ್ಕೃತಿಕ ಉಪಕ್ರಮಗಳಿಗಾಗಿ ಸಂಸ್ಕೃತಿ ಸೆಂಟರ್ ನನ್ನು ಶ್ಲಾಘಿಸಿದರು. ಇಳಕಲ್ ಮತ್ತು ಮೊಳಕಮೂರು ಕೈಮಗ್ಗದ ಪ್ರಸ್ತುತಿ ರಾಧಿಕಾ ಜೋಶಿ ಅವರಿಂದ ಸಂಕಲನ ಮತ್ತು ಮಧುಶ್ರೀ ಮೂರ್ತಿ ಅವರು ಸುಗ್ಗಿ ನೃತ್ಯದ ಮೂಲಕ ಕರ್ನಾಟಕದ ಜಾನಪದ ಕಲೆಯನ್ನು ಪ್ರಸ್ತುತಪಡಿಸಿದರು. ಮತ್ತೊಬ್ಬ ಕನ್ನಡತಿ ಹರ್ಷಾ ರಾಣಿ ಒಡಿಶಾದ ಸಂತಾಲಿಯನ್ನು ಪ್ರಸ್ತುತಪಡಿಸಿದರು. ಇತರ ಸಾಂಪ್ರದಾಯಿಕ ಮತ್ತು ಜಾನಪದ ನೃತ್ಯಗಳು ಸಂಸ್ಕೃತಿಗಳ ಮಿಶ್ರಣ

Stuttgarter Weihnachtsmarkt

 ಡೆಲ್ಲಿ ಹಪ್ಪಳದಿಂದ - ಮುಲ್ಲೆಡ್ ವೈನ್ - ಗ್ಲುಹ್ವೆಯ್ನ್ ( ಜರ್ಮನ್ನಲ್ಲಿ  ಗ್ಲೋ ಮೈನ್) ಮೈಸೂರಿನ ದಸರಾ ಹಬ್ಬವನ್ನು ಇಡೀ ವಿಶ್ವವೇ ನೋಡುವಂತೆ ವಿಜೃಂಭಣೆಯಿಂದ ಆಚರಿತ್ತೆವೆ. ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನಕ್ಕೆ ದೇಶದೆಲ್ಲೆಡೆಯಿಂದ ವ್ಯಾಪಾರಿಗಳು ತಮ್ಮೂರಿನ ಕರಕುಶಲ ವಸ್ತುಗಳು ಅಲ್ಲಿ ಮಾರುತ್ತಿದ್ದರು. ಇವೆಲ್ಲ ನೋಡಿ ಬೆಳೆಗ ನಂಗೆ ಇದಕ್ಕಿಂತ ಆದ್ದೂರು ಏನಿರಲಾರದು ಎಂಬ ನಂಬಿಕೆ. ಅದೇ ಈಗಲೂ ಸಹ. ನನಗೆ ಅಚ್ಚು ಮೆಚ್ಚು . ನಾನು ಕಾನ್ವೆಂಟಿನಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ  ಮಾಡಿದ್ದರಿಂದ ನನಗೆ ಸ್ವಲ್ಪ ಮಟ್ಟಿಗೆ ಈಸ್ಟರ್ ಮತ್ತು ಕ್ರಿಸ್ಮಸನ್ನಿನ ಬಗ್ಗೆ ಮಾಹಿತಿ ಇದೆ. ಹಾಗೆ ನಮ್ಮ ಮನೇಲಿ ನಾನು ಪುಟ್ಟ ಕ್ರಿಸ್ಮಸ್ ಗಿಡ ಇಡುತ್ತಿದೆ. ಆದರೆ ಕ್ರಿಸ್ಮಸ್ ಮಾರ್ಕೆಟ್  ಬಗ್ಗೆ ನಂಗೆ ಏನು ಗೊತ್ತಿರ್ಲಿಲ್ಲ ಲಂಡನ್ನಿಗೆ ಬಂದ ನಂತರ  ಸಾಂಪ್ರದಾಯಿಕ ಕ್ರಿಸ್ಮಸ್ ಮಾರ್ಕೆಟ್ ಏನೆಂದು ನೋಡಿದೆ.  ಈಗ ಇಲ್ಲಿನ ನಿವಾಸಿಆದಾಗಿಂದ ನಾವು ಈ ಮಾರ್ಕೆಟ್ ಪ್ರತಿ ವರ್ಷ ಹೋಗೋದು ಒಂದು ಸಂಪ್ರದಾಯವೇ ಆಗಿದೆ.  ಶಾಪ್ಪಿಂಗಿಂತಲೂ ಅಂಗಡಿಗಳ ಅಲಂಕಾರ ಅಲ್ಲಿ ಮಾರುವ ವಸ್ತುಗಳು ನೋಡಲು ಬಹಳ ಖುಷಿ. ಈ ಬಾರಿ ಹದಿನಾಲ್ಕು ವರ್ಷಗಳ ನಂತರ ಬಾತ್ ಊರಿನ ಕ್ರಿಸ್ಮಸ್ ನೋಡಲು ನನ್ನ ಲೇಡೀಸ್ ಗ್ಯಾಂಗಿನೊಂದಿದೆ ಹೊಂದಿದ್ದೆ. ಬಾತ್ ನ ಕ್ರಿಸ್ಮಸ್ ಮಾರ್ಕೆಟ್ ಯುಕೆ ನ ಒಂದು ಪ್ರಸಿದ್ಧ ಮಾರ್ಕೆಟ್.  ಬಿಸಿ ವೈನ್ ಮತ್ತು ಹಸಿರು ಸೇಬಿನ ರಸವನ್ನು ದಾಲ್ಚಿನ್ನಿ ಲವಂ

''Winter'' by Prateek Deshpande

 It has been a while since I write anything nice! But this one is from my son.. inspired by Christina Rossetti's ''May'' Prateek created some beautiful lines befitting the season. Winter    I cannot tell you how it was,   But this I know:it came to pass Upon a golden, chilly morning When the year was old; ah, such a brilliant year! As yet the snow was not born on the cars along the road; The last leaf had not fallen as yet;  Nor any bear hibernated on its bed. I cannot tell you what it was,  But this I know: it did but pass. It passed away with a chilly Monday,  Like all nice things it passed away,  And left me younger, and warmer, and brighter. By Prateek Deshpande 06/12/2023

ಸಂಪ್ರದಾಯದಲ್ಲಿ ವಿನ್ಯಾಸ; ಭಾರತೀಯ ಕೈಮಗ್ಗದ ವಿಶೇಷ

ಇಮೇಜ್
ಇಳಕಲ್ ಸೀರೆ ಉಟ್ಕೊೊಂಡು, ಮೊಣಕಾಲ್ ಗಂಟ ಎತ್ಕೊೊಂಡು, ಏರಿ ಮೇಲೆ ಎರಿ ಬಂದ್ಲು ನಾರಿ... ಬುತ್ತಿಿ ತುಂಬ ಪ್ರೀತಿ ತಂದ್ಲು ಗೌರಿ... ಮಲ್ಲಿಗೆ ಈ ಮಲ್ಲಿಗೆ, ಆಹಾ ಮೈಸೂರು ಮಲ್ಲಿಗೆ.. ಈ ಹಾಡು ಕೇಳಿದಾಗಲೆಲ್ಲ ನೆನಪಾಗುವುದು ಭಾರತೀಯ ಕೈಮಗ್ಗ. ಲಂಡನ್‌ನಲ್ಲಿ ಕೈ ಮಗ್ಗದ ಮಾತೆಲ್ಲಿಂದ ಎಂದುಕೊಂಡು ಸುಮ್ಮನಿದ್ದೆೆವು. ಆದರೆ ಈಗ ಎಲ್ಲಿ ನೋಡಿದರಲ್ಲಿ ಕೈಮಗ್ಗದ್ದೇ ಚರ್ಚೆ.  ಭಾರತೀಯ ಕೈಮಗ್ಗಕ್ಕೆೆ ಇರುವ ವೈಶಿಷ್ಟ್ಯವೇ ಅದು. ಕೈಮಗ್ಗ ಭಾರತ ಸಂಪ್ರದಾಯದ ಹೆಮ್ಮೆೆ ಮತ್ತು ಅದರ ಸಾಂಸ್ಕೃತಿಕ ವೈಭವದ ಅಭಿವ್ಯಕ್ತಿಿಯಾಗಿದೆ. ವಾಸ್ತವವಾಗಿ, ಕೈಮಗ್ಗ ಕ್ಷೇತ್ರವು ಪ್ರಾಾಚೀನ ಕಾಲದಿಂದಲೂ ಮಹತ್ವವನ್ನು ಪಡೆಯುತ್ತಲೇ ಇದೆ. ಭಾರತೀಯ ಕೈಮಗ್ಗದ ಮೂಲ ಅರ್ಥವೆಂದರೆ ಸಂಪ್ರದಾಯಗಳನ್ನು ಹಾಗೇ ಇಟ್ಟುಕೊಂಡು ವಿನ್ಯಾಾಸಗಳನ್ನು ರಚಿಸುವುದು. ಇದೇ ಕಾರಣಕ್ಕೆೆ  ಈ ವಲಯವು ಯಾವಾಗಲೂ ಬೇಡಿಕೆಯಲ್ಲಿದೆ.  ಹಿಂದಿನ ಕಾಲದಲ್ಲಿ ನೇಕಾರರು, ಕಸೂತಿ ಮತ್ತು ಮುದ್ರಕರು  ತಮ್ಮ ಕೌಶಲದಿಂದ ಕೈಯಾರೆ ಅದ್ಭುತಗಳನ್ನು ಮಾಡುತ್ತಿಿದ್ದರು. ಆದರೆ, ಈ ವಲಯವು ಅಭಿವೃದ್ಧಿಿಯ ಕಾರ್ಯಗಳನ್ನು ಸರಳಗೊಳಿಸುವ ಉದ್ದೇಶದಿಂದ ವಿವಿಧ ಯಂತ್ರಗಳಿಗೆ ಜನ್ಮ ನೀಡಿದೆ. ಪ್ರಾಾಚೀನ ಕಾಲದಿಂದ ಇಲ್ಲಿಯವರೆಗೆ, ಭಾರತೀಯ ಕೈಮಗ್ಗವು ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿಿನಲ್ಲಿ ಸ್ಥಿಿರವಾಗಿ ಪ್ರಯಾಣಿಸಿದೆ. ವಿಶ್ವದ ಎರಡನೇ ಅತಿದೊಡ್ಡ ವಲಯವಾಗಿದ್ದು, ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚು ಜನರಿಗೆ ವ

ಸುವರ್ಣ ವರ್ಷದ ನೆನಪು ಅಮೃತ ಘಳಿಗೆಯಲ್ಲಿ

ಇಮೇಜ್
  ये शुभ दिन है हम सबका लहरा लो तिरंगा प्यारा ನಮ್ಮ ದೇಶದ ಸ್ವತಂತ್ರ ಹೋರಾಟದ ಇತಿಹಾಸ ನಮ್ಮ ಪಠ್ಯದಲ್ಲಿ ಹಾಗು ಸಿನೆಮಾಗಳಲ್ಲಿ ನೋಡಿದ್ದೇವೆ. ನಮ್ಮ ಸ್ವತಂತ್ರ ಹೋರಾಟದ ಕಥೆಗಳು ನಮ್ಮನ್ನು ಭಾವುಕರನ್ನಾಗಿಸುವುದರ ಜೊತೆಗೆ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ. ಆದರೆ ಭಾರತ ಈಗೆ ಪ್ರಪಂಚವನ್ನೇ ಎದುರಿಸಿ ಎಲ್ಲ ಕ್ಷೇತ್ರದಲ್ಲೂ ಬೃಹದ್ಸಾಧನೆ ಮಾಡುತ್ತಲೇಯಿದೆ. ಆಗಸ್ಟ್ ೧೫ ಹತ್ತಿರ ಬಂದಂತೆ ನಮ್ಮಲಿ ದೇಶ ಪ್ರೇಮ ಹೆಚ್ಚಾಗಿ ಹುಚ್ಚಾಗುತ್ತೇವೆ. ಆದರೆ ಈ ಬಾರಿ ''ಹರ್ ಘರ್ ತಿರಂಗ'' ಅಭಿಯಾನ ಒಂದು ವಿಶೇಷ ವಿಚಿತ್ರ ಭಾವನೆ ನಮ್ಮೆಲ್ಲರ ಮನದಲ್ಲಿ ಮೂಡಿಸುತು. ಎಲ್ಲರು ಹೋರಾಡಿದ ಭಾರತೀಯರೆಂಬ ಹೆಮ್ಮ ಸಹಜವಾಗಿಯೇ ಮೂಡಿತು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲವಾದರೂ ಅದರ ಶಾಲೆಯ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಅಂತ ಹೆಮ್ಮೆಯಿಂದೆ ಹೇಳಿಕೊಳ್ಳುತ್ತೇನೆ. ''ಏ ಮೇರೇ ವತನ್ ಕೆ ಲೋಗೋ ಝರ ಆಂಖ ಮೇ ಭರಲೋ ಪಾನಿ'' ಈಹಾಡು ನಾನು ಮೊದಲ ಬಾರಿಗೆ ಯಾವಾಗ ಕೇಳಿದ್ದೇನೋ ಗೊತ್ತಿಲ್ಲ ಆದರೆ ಎಂಟನೆಯ ತರಗತಿಯಲ್ಲಿ ಸ್ವಾತಂತ್ರ ದಿನದ ಅಂಗವಾಗಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿದ್ದು ಒಂದು ದೊಡ್ಡ ಸುದ್ದಿ. ಈ ಕಾರ್ಯಕ್ರಮ ನಮ್ಮ ಶಾಲೆಯ ಕ್ರೀಡಾ ಮೈದಾನದಲ್ಲ! ಮೈಸೂರಿನ ಪ್ರತಿಷ್ಠಿತ ಬನ್ನಿ ಮಂಟಪದಲ್ಲಿ. ಏಕೆಂದರೆ ಆ ವರ್ಷ ಸ್ವಾತಂತ್ರ ಸಿಕ್ಕ ಸುವರ್ಣ ವರುಷ ಅಂದರೆ 1997. ಮ

''ಹಾರುವ ಆಸೆ ಇದ್ದರೇ ಗಾಳಿ , ರೆಕ್ಕೆ ಎಲ್ಲವನ್ನು ನಾವೇ ಸೃಷ್ಟಿಸಬೇಕು "

ಇಮೇಜ್
  "ಗಾಳಿ ಬಂದಾಗ ತೂರಿಕೊ" ಅನ್ನುವ ಗಾದೆಗೆ ಹೊಸ ಅರ್ಥ ಕಲ್ಪಿಸಿದರೆ -" ಹಾರುವ ಆಸೆ ಇದ್ದರೇ ಗಾಳಿ , ರೆಕ್ಕೆ ಎಲ್ಲವನ್ನು ನಾವೇ ಸೃಷ್ಟಿಸಬೇಕು ". ಅವಕಾಶಗಳಿಗೆ ಕಾಯದೆ ನಾವೇ ಅವಕಾಶಗಳನ್ನು ಸೃಷ್ಟಿಸಿದರೆ ?