ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಶಸ್ಸಿನ ಉಡುಗೊರೆ

ನನ್ನ ೩೭ ನೇ ಹುಟ್ಟುಹಬ್ಬ ಅಂದರೆ ೩೭ ಮುಗಿತು ೩೮ಕ್ಕೆ ಮುನ್ನಡೆತ್ತಿದಿನೋ ಅಥವಾ ತೆವಳುತ್ತಿದಿನೋ  ಅಥವಾ ನುಗ್ಗತಾಇದೀನೋ ಗೊತ್ತಿಲ್ಲ. ಒಟ್ಟಿನಲ್ಲಿ ಸಮಯ ಮಾತ್ರ ಮಿಂಚಿನ ಗತಿಯಲ್ಲಿ ಚಲಿಸುತ್ತಿದೆ. ನನ್ನ ೧೫ನೆ ಹುಟ್ಟುಹಬ್ಬದಂದು ನನ್ನ ಭವಿಷ್ಯದ ಬಗ್ಗೆ ಕನಸು ಏನಿತ್ತೋ ಎನ್ನುವುದು ಈಗ ನೆನಪಿಸಿಕೊಂಡರೆ ನಗುಬರುವುದಲ್ಲೆದೆ ನಾನು ಬೆಳಸಿಕೊಳ್ಳುವ ವ್ಯಕ್ತಿತ್ವದ ಬಗ್ಗೆ ಒಂದು ರೀತಿ ವಿಚಿತ್ರವೆನಿಸುತ್ತದೆ. ನಮ್ಮ ಜೀವದಲ್ಲಿ ಸ್ನೇಹೋತರ  ಸಂಬಂಧಿಕರ ಮಹತ್ವ ಎಷ್ಟು ಮುಖ್ಯ ಎಂದು ಎಲ್ಲರಿಗೆ ತಿಳಿದಿದೆ. ಪ್ರಾಯದಲ್ಲಿ ನನ್ನ ಸ್ನೇಹಿತೆಯರ ದೊಡ್ಡ ಮನೆ, ಕಾರು ಎಲ್ಲವನ್ನು ನೋಡಿ ಸಹಜವಾಗಿ ಪ್ರಭಾವಿತಳಾಗಿ ನಾನು, ಭವಿಷ್ಯದಲ್ಲಿ ಒಳ್ಳೆಯ ನೌಕರಿ ಹಿಡಿದು ಭೌತಿಕ ಐಷಾರಾಮಿನ ವಸ್ತುಗಳಿಂದ ಆರಾಮಾಗಿ ಜೀವನ ನಡೆಸುವ ಕನಸನ್ನು ಕಂಡಿದ್ದೆ.ಅದಕ್ಕೆ ತಕ್ಕಂತೆ ಸಾಕಷ್ಟು ಕಷ್ಟು ಪಟ್ಟು ನನ್ನ ವಿದ್ಯಾಭ್ಯಾಸ ಮುಗಿಸಿ ಈಗ ಆ ವಸ್ತುಗಳೆಲ್ಲ ನನ್ನ ಹತ್ತಿರ ಇದ್ದರೂ ಅದರಮೇಲಿನ ಮೋಹವು ಕಡಿಮೆ ಆಗಿದಿಯೋ ಅಥವಾ ಅವುಗಳ ಮಹತ್ವವು ತಿಳಿದಿದೆಯೋ,ಅವುಗಳ ಸ್ವಾಮ್ಯದಿಂದ ಹೆಮ್ಮೆಯೇನು ಆಗುತ್ತಿಲ್ಲ. ೩೮ನೆ ವಯಸ್ಸಿನಲ್ಲಿ ಮನವರಿಕೆಯಾದ ಹುಟ್ಟುಹಬ್ಬದ ಉಡುಗೊರೆ ಅರ್ಥ. ಈಗ ನಾನು ಪ್ರಭಾವಿತಳಾದರೆ ಅದು ಒಬ್ಬರಲ್ಲಿ ಇರುವ ಒಳ್ಳೆಯ ಗುಣ, ಒಬ್ಬ ಯೋಗಿ , ಒಬ್ಬ ಧ್ಯಾನಿ , ಸಭ್ಯ ಗುಣವುಳ್ಳ ಮಕ್ಕಳ ತಂದೆ ತಾಯಿ ,ಅನನ್ಯ ಕಲೆಯಿರುವ ವ್ಯಕ್ತಿ , ಕಠಿಣ ಪರಿಶ್ರಮದಿಂದ ವ್ಯಕ್ತಿತ್ವ ರೂಪಿ
ಇಮೇಜ್
Past was worth a fortune The present is priceless and the future is precious.. Build your present with the fortune you saved to secure a precious future. Gift yourself with a precious present of acceptance. Accepting the situation, Accepting the behavior, Accepting without any reservations. Accept without any guilt. Future will be as good as your present. Make all the effort for a wonderful present

ಶತಾವತಾರ

ನನ್ನ ಸ್ನೇಹಿತೆಯೊಬ್ಬಳು ಈ ಲೊಕ್ಡೌನ್ ಸಂದರ್ಭದಲ್ಲಿ ತಲೆ ಕೆಟ್ಟು ದಿನನಿತ್ಯ ತನ್ನ ಹೈ ಸ್ಕೂಲ್ ಗೆ ಹೋಗುವ ಮಗ ಹಾಗು ಸದಾ ಆಫೀಸ್ ಕೆಲಸದ್ಲಲಿ ತೊಡಗಿದ್ದ ತನ್ನ ಪತಿಯಿಂದ ಬೇಸರಗೊಂಡು ದಿನಮುಗಿಯುವ ಸಂದರ್ಭದಲ್ಲಿ ಹತಾಶೆಯಾಗಿ ರೌದ್ರಾವತಾರ ತಾಳಿ ತನ್ನನ್ನು ಮಾತಾ ರುದ್ರಮ್ಮ ದೇವಿ ಎಂದು ಕರೆಯಲು  ಪ್ರಾರಂಭಿಸಿದಳು. ಇದರಿಂದ ಪ್ರಭಾವಿತಳಾದ ನಾನು ಅವಳಲ್ಲಿ ಕೋರಿ ಈ ಹೆಸರನ್ನು ನನ್ನ ಹಾಸ್ಯ ಚುಟುಕಗಳಿಗೆ ನಾಮಕರಣ ಮಾಡಿದೆ. ವ್ಯಂಗ್ಯ ಹಾಗು ಹಾಸ್ಯ ಪ್ರವೃತ್ತಿಯುಳ್ಳ ನಾವೆಲ್ಲರೂ ಸಾಂದರ್ಭಿಕ ಹಾಸ್ಯ ಸನ್ನಿವೇಶಗಳು ಲೆಕ್ಕವಿಲ್ಲದಷ್ಟು ಇದ್ದರು ಅದನ್ನು ಚುಟುಕದ ರೂಪಕ್ಕೆ ಅಳವಡಿಸುವುದು ಸ್ವಲ್ಪ ಕಷ್ಟ. ಇದು ನನ್ನ ಪ್ರಪ್ರಥಮ ಪ್ರಯತ್ನ. 1.ಮಕ್ಕಳಿರಲವ್ವ ಮನೆ ತುಂಬಾ ಅಂತ ಹಿರಿಯರು ಹೇಳ್ರಿದ್ರು ಅವರ ಮಾತು ಕೇಳ್ದೆ ನಾವು ಬರಿ ಎರಡೇ ಮಾಡ್ಕೊಂದೀವಿ ಮನೆ ತುಂಬಾ ಇದ್ದಿದ್ರೆ ಬಹುಷಃ ಶಾಂತಿ ಇರ್ತಿತ್ತೇನೋ ಮಾತಾ ರುದ್ರಮ್ಮ ದೇವಿ 2.ಮನುಷ್ಯನ ಸಹಜ ಗುಣಗಳಾದ ಮರೆವು ,ಮನೆ ಕೆಲ್ಸದಲ್ಲಿ ನಿರಾಸಕ್ತಿ, ಬಾಯಾಡಿಸುವುದು ,ಆಲಸ್ಯತನ ಹಾಗು ಸದಾ ಮಲಗುವುದು. ಈ ಪಂಚೆಇಂದ್ರಿಯಗಳನ್ನು ತೆರೆದು ಬಾಳುವನೇ ನಿಜವಾದ ಮಾನವ. ಜಗತ್ತಿನ ಎಲ್ಲಾ ಜನರು ಮನುಷ್ಯರೇ ಇರುವಾಗ ಏಕೆ ಬದಲಾಗಬೇಕು.ನೀವು ಬದಲಾದರೆ ಪ್ರಳಯ ಆದೀತು ಜೋಪಾನ .. ಮಾತಾ ರುದ್ರಮ್ಮ ದೇವಿ 3.ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಹಾಗಾದರೆ ತಂದೆ ? ಹೆಡಮಾಸ್ಟರ್..ಮಕ್ಕಳನ್ನೇ ಕೇಳ

ವಾಸ್ತವಿಕೆಯ ಅಪ್ಪುಗೆ ಅಪ್ಪನಿಗೆ

ಅಮ್ಮನ ಸೆರಗು ಹಿಡುದು ಅಪ್ಪನ ದಾರಿ ನೋಡುವುದು  ಅಮ್ಮನ ಜೊತೆ ಪೇಟೆಗೆ ಹೋದಾಗ ಸಣ್ಣ ಪುಟ್ಟದಕ್ಕೆ ಹಠ ಮಾಡುವ ರೀತಿ  ಅಪ್ಪನೊಂದಿಗೆ ಹೋದಾಗ ಹಟದ ತರ್ಕವೇ ಬೇರೆ  ಬೇಕಾಗಿದ್ದನ್ನು ಕೇಳುವ ಭಾವನಾತ್ಮಕ ರೀತಿ  ಮನೆಗೆ ಬಂದೊಡನೆ ಅಮ್ಮನು ಅಪ್ಪನ ಮೇಲೆ ಸಿಟ್ಟಾಗುವ ಭೀತಿ ನಾವು ಶಾಲೆಯ ಯಾವ ತರಗತಿಯಲ್ಲಿ  ಓದುತ್ತಿದೇವೆ ಎಂಬ ಸುಳಿವಿಲ್ಲದ ತಂದೆ  ಆದರೆ ಪಠ್ಯ ಪುಸ್ತಕದ ಖರೀದಿಗೆ ಸದಾ ಮುಂದೆ  ತಿಂಗಳುಗಳಿಂದಲೇ ಮಾಡಿಸುವರು ತಯಾರಿ   ಪರೀಕ್ಷೆಯ ಸಮಯದಲ್ಲಿ ಶಾಲೆಗೆ ಅಪ್ಪನೊಂದಿಗೆ ಸವಾರಿ  ಪರೀಕ್ಷೆಯ ನಂತರ ಸಮೀಕ್ಷೆ ವಿಮರ್ಶೆ ಫಲಿತಾಂಶಕ್ಕಿಂತಲೂ ತರುವ ಭಯ  ಇರಲಿ ಬಿಡು ಮುಂದಿನದಕ್ಕೆ ಓದು ಏನೇಯಾಗಲಿ ಗಣಿತಕ್ಕೆ ಬರಬೇಕು ಹೆಚ್ಚು ಅಂಕ  ಅಮ್ಮನು ಆ ನೀರಿಕ್ಷೆಯಲ್ಲಿ ಕೂಡುವಳು ನಮ್ಮೊಂದಿಗೆ ರಾತ್ರಿಯ ತನಕ ಅಮ್ಮನೊಂದಿಗೆ ಅಡುಗೆಯ ಮನೆಯಕೆಲಸದಲ್ಲಿ ಕೈಜೋಡಿಸುವುದು    ಹೆಣ್ಣುಮಕ್ಕಳ ಕಾಳಜಿ ತಂದೆಯ ಪ್ರತಿಯೊಂದು ಕೆಲಸದಲ್ಲಿ  ಮಕ್ಕಳು ದೊಡ್ಡವರಾದಂತೆ ಅವರ ಆರಾಮ ವಿರಾಮದ ವ್ಯವಸ್ಥೆ  ತಾಯಿಯಂತೆ ಮಕ್ಕಳ ಚಿಂತೆ ವ್ಯಕ್ತ ಪಡಿಸದೆ  ತನ್ನ ಹೆಣ್ಣು ಮಕ್ಕಳು ಸ್ವಾವಲಂಬಿಯಾಗುವ ವ್ಯಾವಹಾರಿಕ ಅಭ್ಯಾಸ  ವಿದ್ಯಾಭ್ಯಾಸದ ಪ್ರಾಮುಖ್ಯತೆಯ ಜೊತೆ ಸಾಂಪ್ರದಾಯಿಕ ಸಭ್ಯತೆಯ ಪಾಠ  ಹೆಣ್ಣಿನ ಪ್ರಾಯೋಗಿಕ ವಿಚಾರಗಳು ಜೀವನಶೈಲಿಯ ವಿಷಯಗಳು  ಕುಟುಂಬದ ನಿರ್ಧಾರಗಳಲ್ಲಿ ನಮ್ಮೊಂದಿಗೆ ಚರ್ಚೆ  ನಮ್ಮ ಆಸೆಗಳನ್ನೂ ಊಹಿಸಿ ವೃತ್ತಿ ಕ್ಷೇತ್ರದ ಆಯ್ಕೆಯ ನಿರ್ಧಾರಗಳಿಗೆ ಸಮರ್ಥನೆ  ಫ್ಯಾ
ಇಮೇಜ್
On a lazy evening, my kids were running around and as always with lots of laughing and calling out each other which made me a bit wanting some peaceful time.So, asked my son to play with building blocks along with sister as she loves to play with colourful blocks. As they started building it turned out to be a magnificent pyramid and Prateek had something to say , which I would like to share here in my words. Building Hopes with colours Colourful blocks made me think As the universal at large is in sync Fascinated by the rainbow  my child  Made him build a pyramid wild Each colour was building hope Made us feel that we could cope Simple word told by my son After every dark night is the time for the bright sun ---------------- Rainbow and sun cannot be touched by us as they are up in the sky The state of being happy and calm is within us and makes us go on a high  Just by looking at these and getting so much positive energy which are millions of
Penning down Prateek's story in my words. He wanted to write something on the occasion of World Book day  RAY     There was a boy who would always talk, talk and talk  while reading, writing and while returning home by walk. This caused problems to others at his school And at football clubs and at swimming pool. Ray would never complete his task Nor allow his table mates to do multitask But Ray was a very good sport He Would put all his energy and effort into it Teacher told him to read and write Become a boy with future bright. His is mum told him to learn music    His dad said try being an athletic. Ray’s trial with music was rather pathetic He got phobic when trying to be an athletic. Ray was very upset and sad But his dad told it was not all that bad. To cheer Ray dad decided to take him to a match Exciting and thrilling cricket to watch Ray was not sure about the rules of the sport His dad explained all abou

ಸಂಗ್ರಹಿಸಬೇಕಾದ ವ್ಯಕ್ತಿವ್ವ

ನಾವು ಯಾವಾಗಲು ದೂರದರ್ಶಿಗಳಾದರೆ ? ಆಹಾ !! ಎಂತಹ ಪರಿಪೂರ್ಣ ಸ್ಥಿತಿ ..ಅಂತೀರಾ ..ಪ್ರಶಾಂತ ಮನಸ್ಸಿನವರು ಆದ್ರೆ? ..ನಾನು ಯಾರೋ ಯೋಗಿಗಳ ಬಗ್ಗೆ ಮಾತಾಡ್ತಿದಿನಿ ಅಂದುಕೊಂಡಿದ್ದೀರಾ ...ಖಂಡಿತ ಇಲ್ಲ! ಕಳೆದ ವಾರಗಳಿಂದ ಪ್ರಪಂಚದಲ್ಲಿ ಆಗುತ್ತಿರುವ ಜೈವಿಕ ಯುದ್ಧದಿಂದ ಆಗಿರುವ ಜೀವ ಹಾನಿ ಕಲ್ಪನೆಗೂ ಮಿಗಿಲಾದುದು. ಇಂತಹ ಸಮಯದಲ್ಲಿ ನನ್ನ ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತಿವೆ. ಮನೆಯ ಹೊರಗೆ ನಿರ್ದಿಷ್ಟ ಕಾರಣವಿಲ್ಲದೆ ಹೋಗಲು ಸಾಧ್ಯವಿಲ್ಲ. ಹಾಗಿದ್ದಾಗ ನಾವು ಯಾವ ವಸ್ತುಗಳನ್ನು ಸಂಗ್ರಹಿಸಿ ಇಡಲಿ? ಇದು ಗೃಹಬಂಧನದ ಮೂರನೆಯ ವಾರ.. ಮೊದಲನೆಯ ವಾರದಲ್ಲಿ ಅಷ್ಟೇನೂ ಕಷ್ಟವಾಗಲಿಲ್ಲ ಏನೋ ಒಂದು ಹೊಸ ಅನುಭವ. ಸಾಕಷ್ಟು ದಿನಸಿ,ಕಾಯಿಪಲ್ಯೆ ಹಾಗು ಖಾದ್ಯ ವಸ್ತುಗಳನ್ನು ಶೇಖರಿಸಿ  ಇಟ್ಟಿದ್ದೀನಿ. ಎರಡನೇ ವಾರ ಬರುತ್ತಿದ್ದಂತೆ ಊಟದಮೇಲೆ ಗಮನ ಕಡಿಮೆ ಆಗಿ, ಮಕ್ಕಳು ಮನೆಯವರೊಂದಿಗೆ  ಯಾವುದೇ ಗೊಂದಲವಿಲ್ಲದೆ ಮಾನಸಿಕ ಸಂತುಲವನ್ನು ಕಳೆದುಕೊಳ್ಳದೆ ಅನಿರೀಕ್ಷಿತ ಹಾಗು ಅನಿಶ್ಚಿತ ದಿನಗಳನ್ನು ಹೇಗೆ ಕಳೆಯುವುದು ಎಂಬ ಯಕ್ಷ ಪ್ರಶ್ನೆ? ಮೂರನೇಯ ವಾರಾಂತ್ಯದ ಹೊತ್ತಿಗೆ ನನ್ನ ಅಜ್ಜಿಯ ಜೀವನ ಚರಿತ್ರೆ ಕಣ್ಣು ಮುಂದೆ ಬಂತು ..ಭಾಳ ಶಾಂತ ಸ್ವಭಾವದವರು ಹಾಗು ಅಲ್ಪ ತೃಪ್ತರು ಆದ ಸರ ಜೀವಿ ನನ್ನ ಅವ್ವ (ತಾಯಿಯ ತಾಯಿ) ಈ ದಿನಗಳಲ್ಲಿ ನಾನು ಸಂಗ್ರಹಿಸಿ ಶೇಖರಿಬೇಕಾಗಿದ್ದು ಏನು ಎಂದು ಸ್ವಲ್ಪ ಸ್ವಲ್ಪ ತಿಳಿಯುತ್ತಿದೆ ೧. ಸಹನೆ - ಇದು ಒಂದೇ ದಿನದಲ್

ವೈಯಕ್ತಿಕ ಸಮಯ

ಕೆಲವು ದಿನಗಳಿಂದ ನನ್ನ ತಲೆಯಲ್ಲಿ ವಿಷಯಗಳ ವಿಸ್ಪೋಟ ಆಗುತಿದ್ದೆ.ಒಂದೆಡೆ ಆದ್ಯತೆಗಳ ಪರಿಚಯವಾದರೆ ಮತ್ತೊಂದೆಡೆ ನನ್ನ ವೈಯಕ್ತಿಕ  ಬೆಳವಣಿಗೆ ಆಗುತ್ತಿಲ್ಲ ಹಾಗು "ಮೈ ಟೈಮ್" ಸಿಗುತ್ತಿಲ್ಲವಲ್ಲ ಅನ್ನೋದು ನನ್ನ ಗೋಳು. ಮಕ್ಕಳನ್ನು ಶಾಲೆಗೆ ಕಳಿಸಿ ಮುಂಜಾನೆಯ ಆ ಒಂದ್ ಕಪ್ ಚಹಾದ ಆಸ್ವಾದನೆ ಆಹಾ !! ಎಂತಹ ಅನುಭವ! ಕೇವಲ ೨ ವಾರಗಳು ಆಗಿವೆ ಮಕ್ಕಳು, ಮನೆಯವರು ಎಲ್ಲರು ಮನೆಯಲ್ಲಿ ಇದ್ದಾರೆ .. ನನಗೆ ಇನ್ನೇನು ೩ ವರ್ಷ ತುಂಬುವ ಮಗಳು  ಅವಳು ಹುಟ್ಟುವ ತನಕ ಕೆಲಸ ಮಾಡಿ ,ಈಗ ವಿರಾಮ ತುಗೊಂಡಿದ್ದೆ. ಕ್ವಾಲಿಫೈಡ್ ಅಕೌಂಟೆಂಟ್ ಆದ ನಾನು,ನನ್ನ ಪತಿಯ ಹಾಗು ಕೆಲವು ಸ್ನೇಹಿತರ ಕೆಲಸವನ್ನು ಮಾಡುತಿದ್ದೆ.ಹೀಗಾಗಿ ಕೇಲಸದ  ಒತ್ತಡ ಅಷ್ಟೇನೂ ಇರಲಿಲ್ಲ. ನನ್ನ ಮಗಳನ್ನು ನರ್ಸರಿಗೆ ಸೇರಿಸಿ ಕೆಲಸ ಹುಡುಕುವ ಕೆಲಸ ಭರಾಟೆಯಿಂದ ನಡೆದಿತ್ತು.ಆದರೆ ನನ್ನದೇ ಆದ ಸಮಯ ನನಗೆ ಸಿಗಿತ್ತಿತ್ತು. ನನ್ನ ಹವ್ಯಾಸಗಳಿಗೆ ಸಮಯ,ಶಾಂತಿಯಿಂದ ಕೂತು ಮಧ್ಯಾಹ್ನದ  ಚಹಾ ಕುಡಿಯುವು ಈಗ ಒಂದು ಯಜ್ಞವೇ ಆಗಿದೆ. ಎರಡು ಮಕ್ಕಳ ತಾಯಿಯಾದ ನನಗೆ, ಮಕ್ಕಳ ವಯಸ್ಸಿನಲ್ಲಿ  ೬ ವರ್ಷ ಅಂತರ ಇರುವುದರಿಂದ ಇಬ್ಬರನ್ನು ಸಂಭಾಳಿಸಿವುದು ಕಷ್ಟವಾಗಿದೆ. ಆಫೀಸಿನಲ್ಲಿ ಎಷ್ಟು ಕೆಲಸವಿದ್ದರೂ ಅದನ್ನು  ನಿಭಾಯಿಸಬಲ್ಲ ನಾನು ಮನೆಯಲ್ಲಿ ನನ್ನ ಮಕ್ಕಳನ್ನೇ ಹಿಡಿಯಲು ಸಾಧ್ಯವಾಗುತ್ತಿಲ್ಲ. ನಮ್ಮ ಜೀವನದಲ್ಲಿ ಅತಿ ಮುಖ್ಯವಾದುದು ಅಂದರೆ ನಮ್ಮ ಕುಟುಂಬ ,ಅದರಲ್ಲೂ ನಮ್ಮ ಮಕ್ಕಳು.ಅವ

ಗೃಹ ಬಂಧನ

ನೆ ನಪಿನ ಬಾವಿಯಲ್ಲಿ ಇಣಕಿ ನೋಡಿದಾಗ ನೀರಿನ ಮೇಲಿದ್ದ ಒಣಗಿದ ಎಲೆಗಳು,  ಧ್ಹೋಳು ಎಲ್ಲವು ಕೆಳಗಿದ್ದ ನೀರನ್ನು ಮುಚ್ಚಿತ್ತು. ಸ್ವಚ್ಛ ನೀರು  ನೋಡ ಬಯಸಿ ನಾನು ಒಂದು ಕಲ್ಲನ್ನು ಎಸೆದಾಗ ನೀರು ಅಷ್ಟೇ ಅಲ್ಲದೆ ಬಾವಿಯ ಆಳವು ಗೊತ್ತಾಯಿತು. ನಮಗೆ ತಿಳಿಯದೆ ನಮ್ಮ ಮನಸ್ಸಿನ ಆಳದಲ್ಲಿ ಅದೆಷ್ಟೋ ನೆನಪುಗಳನ್ನು ಕೂಡಿಟ್ಟು ಅವುಗಳ ಮಹತ್ವ ನಮಗೆ ಆಗ ತಿಳಿಯದೆ ಈಗ ಸಮಯ ಬಂದಾಗಲೆಲ್ಲ ಅವುಗಳ ಆಳ ತಿಳಿಯುತ್ತದೆ. ನಮ್ಮ ತಾಯಂದಿರು ಊಟ ಬಡಿಸಿ ಎಲ್ಲರ ಊಟ ಮುಗಿದಮೇಲೆ ತಾವು ಊಟ ಮಾಡುವುದು  ಸಾಮಾನ್ಯ ಪದ್ಧತಿ. ನಾವೆಲ್ಲ ಆಗ ಅವರು  ಮಕ್ಕಳು ಗಂಡಸರು ಹಾಗು ಹಿರಿಯರಿಗೆ ಊಟ ಬಡಿಸುವ ಮೂಲಕ  ಮರ್ಯಾದೆ ಕೊಡುತ್ತಾರೆ ಅಥವಾ  ಹೆಂಗಸರ ಕೆಲಸವೇ ಅಷ್ಟು ಅಂತ ತಿಳಿದದ್ದ್ರೆ ಅದರ ಮತ್ತೊಂದು ಅರ್ಥ ನನಗೆ ಈತ್ತೀಚೆಗಷ್ಟೇ ತಿಳಿಯಿತು. ನಮ್ಮ ತಾಯಿ ಎಲ್ಲರಿಗು ಊಟ ಬಡಿಸುವ ಮೂಲಕ ತಾವು ಎಷ್ಟು ಊಟ ಮಾಡುತ್ತಾರೆ ಅಷ್ಟು ಉಳಿಸಿ, ಉಳಿದದನ್ನು ಎಲ್ಲರಿಗೆ  ಹಂಚಿ ,ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ತಂಗಳು ಪೆಟ್ಟಿಗೆ ಇರುತ್ತಿರಲ್ಲಿ,  ತಾಜಾ ಹಾಗು ಬಿಸಿ ಊಟ ಮಾಡುವುದು ಆರೋಗ್ಯಕ್ಕೆ ಹಿತಕರ ಎಂಬ ನಂಬಿಕೆ. ಈ ಲೇಖನ ಬರೆಯುವ ಸಂದರ್ಭದಲ್ಲಿ ಪ್ರಪಂಚವನ್ನೇ ನಡುಗಿಸಿದ್ದ ಅದೃಶ್ಯವಾದ ಒಂದು ವೈರಾಣು ಕೋವಿಡ್ ೧೯. ತಿಂಗಳು ಗಟ್ಟಲೆ ಗೃಹ ಬಂಧನದಲ್ಲಿ ಇಡೀ ಪ್ರಪಂಚ ಇಟ್ಟಿತ್ತು. ಪೀಳಿಗೆಗಳು ಬದಲಾಗುತ್ತಿದಂತೆ ಆದ್ಯತೆಗಳು ಬದಲಾಗಿತ್ತವೆ. ನಮ್ಮ ತ

೨೦೨೦ ಯುಗಾದಿಯ ಸಂದೇಶ

ಶಿಶಿರ ಋತುವಿನ ಶೀತಲ ವಾತಾವರಣ ಎಲ್ಲರನ್ನು ಅಜಾರಿ ಮಾಡುವಂತೆ ಹಿಂದಿನ ಸಂವತ್ಸರದ ಕೊರೊನ ಋತು ಪ್ರಪಂಚವನ್ನೇ ಮಬ್ಬು ಮಾಡಿದೆ . ನಿಸರ್ಗದ ನಿಯಮದಂತೆ ಶಿಶಿರ ಋತುವಿನ ನಂತರ ವಸಂತ ಋತು ಬರುವಂತೆ ಈ ಭಯಾನಕ ರೋಗದ ನಂತರ ನಿರ್ಮಲ ವಾತಾವರಣವು ಆವರಿಸುವುದು . ಹೇಮಂತ ಋತುವಿನಲ್ಲಿ ಮರದ ಎಳೆಗಳು ಒಣಗಿ ಬೀಳುತ್ತವೆ ಹೊರತು ಮರವಲ್ಲ ಹಾಗೆ ಮನುಷ್ಯನ ದೇಹ ಕುಗ್ಗಿದರು ಅವನ ಆತ್ಮವಿಶ್ವಾಸ ಹಾಗು ನಂಬಿಕೆ ಕುಂಠಿತವಾಗುವುದಿಲ್ಲ ಮನುಷ್ಯನು ಮಾಡುವ ದುಷ್ಕೃತ್ಯಗಳಿಗೆ ಪ್ರಕೃತಿಯು ನೈಜ ರೀತಿಯಲ್ಲಿ ತನ್ನನ್ನು ಗುಣಪಡಿಸಿಕೊಂಡು ಮನುಷ್ಯನಿಗೆ   ಮಾನವನಾಗಲು ಸದಾವಕಾಶವು ಮಾಡಿಕೊಡುತ್ತಿದೆ . ಸರ್ವರಿ ನಾಮವು ಎಷ್ಟು ಅರ್ಥ ಗರ್ಭಿತ ಹಾಗು ಈಗಿನ ಪರಿಸ್ಥಿತಿಯಲ್ಲಿ ಎಷ್ಟು ಸೂಕ್ತ ಎಂಬುದು ಬಹಳ ಆಶ್ಚರ್ಯ ಈ ಹೊಸ ಸಂವತ್ಸರವು ಅತೀಂದ್ರಿಯ ವೈದ್ಯನಾಗಿ ಬಂದು ಲೋಕಕ್ಕೆ ಆವಿರಿಸಿರುವ ಕಾರ್ಮೋಡವನ್ನು   ಮಳೆಯಾಗಿ ಸುರಿದು   ಭೂಮಿಯನ್ನು ಪವಿತ್ರ ಮಾಡುತ್ತದೆ ಎಂಬ ನಂಬಿಕೆಯಿಂದ ಎಲ್ಲಾರಿಗೂ ಸರ್ವರಿ ಯುಗಾದಿಯ ಶುಭಾಶಯಗಳನ್ನು ಹಾಗು ಸಮೃದ್ಧವಾದ ಆರೋಗ್ಯವನ್ನು ಕೋರುತ್ತೇನೆ .

ಅತಿಶಯೋಕ್ತಿ

ಕನ್ನಡ ಭಾಷೆ  ಎಂದರೆ ಅತಿಶಯೋಕ್ತಿ ಬೇರೆಯ ಪದ ಆಗದು ಇದಕ್ಕೆ ಸೂಕ್ತಿ ಕವಿರಾಜಮಾರ್ಗದಿಂದ  ಕವಿಗಳ  ಉತ್ಸಾಹ ಇಮ್ಮಡಿ ಮಾಡಿದ ಅಮೋಘವರ್ಷ ಕನ್ನಡ ಭಾಷೆಯು ಕನ್ನಡಿಗರ ತನು ಮನದಲ್ಲಿ ಹರಿಯುತಲಿರಲಿ  ಸಹಸ್ರ ಶತ ವರುಷ ತುಂಗಾ ಶರಾವತಿ ಕಾವೇರಿ ಕಪಿಲ ಹರಿಯುತ ಮಾಡಿವೇ   ಕನ್ನಡ ಭೂಮಿಯನ್ನು  ಸಿರಿ ಗಂಗ ಹೊಯ್ಸಳರ ಅಡಳಿತತದಲ್ಲಿ ಸಮೃದ್ಧವಾಯಿತು ಕನ್ನಡ ವ್ಯಾಕರಣ ವೈಖರಿ ಪಂಪ ಪೊನ್ನ ರನ್ನರ ಕಾವ್ಯವು ತಂದ  ಜ್ಞಾನ ಹರಿಹರ ರಾಘವಾಂಕರ ಪದಗಳನ್ನು ಕೇಳಿರಿ ಎಂದ ಸರ್ವಜ್ಞ ಪುರಂದರ ಕನಕರಂತಹ ದಾಸ ಕವಿಗಳು ವಿರಳ ಕರ್ನಾಟಕ  ಸಂಗೀತ ರಸಿಕರಿಗೆ ನೀಡಿದರು ರಾಗಗಳ ಪುಷ್ಕಳ ಕುವೆಂಪು ಬೇಂದ್ರೆ ಕಾರಂತರ ಮಹಾಕಾವ್ಯಗಳ ಕೂಟ ದೊರಕಿಸಿದೆ ಕನ್ನಡಕ್ಕೆ ಜ್ಞಾನದ ಪೀಠ ಕನ್ನಡದ ಕಂಪು ಬೀರುತಿರಲಿ ಅಪಾರ ವಿಸ್ತಾರದಲಿ ಸತತವಾಗಿ ಕನ್ನಡಿಗರು ತಮ್ಮ ಭಾಷೆಯನ್ನು ಹೆಮ್ಮೆಯಿಂದ ಬಳಸಲಿ ನಿರಂತರವಾಗಿ